Many package installations fail with the following errors. Especially the ones which involve databases etc. I found this following error while getting postgres SQL work.
perl: warning: Setting locale failed.
perl: warning: Please check that your locale settings:
LANGUAGE = (unset),
LC_ALL = (unset),
LANG = “en_US.UTF-8″
are supported and installed on your system.
perl: warning: Falling back to the standard locale (“C”).
locale: Cannot set LC_CTYPE to default locale: No such file or directory
locale: Cannot set LC_MESSAGES to default locale: No such file or directory
locale: Cannot set LC_ALL to default locale: No such file or directory
or you might even this error
Error: The locale requested by the environment is invalid.
This can be easily sorted out by running following command to generate the required locales.
It has been a relaxing weekend… have spent much of my time away from the laptop, though I have my little digital toy in my hand through out this weekend along with my brand new Camera. Yes, I haven’t written much about it here so far. I bought a Canon EOS 500D couple of months [...]
ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ ಬೀಸುತ್ತಾ, ಹೊದ್ದಿಗೆ ಸರಿಯಾಗಿ ಕಾಲಿಗೆ ಹೊದ್ದಿದೆಯೇ ಎಂದು ಪರೀಕ್ಷಿಸಿದ್ದಷ್ಟೇ ಗೊತ್ತು. ಮತ್ತ್ತೆ ಎಚ್ಚರವಾದಾಗ ಮೈಮೇಲೆ ಒಂದಷ್ಟು ಹೆಚ್ಚಿನ ಬಟ್ಟೆಗಳಿದ್ದದ್ದೂ, ಬೇರೆಯವರು ಮಾತನಾಡುತ್ತಿದ್ದ ಕಿರುದನಿ ಕೇಳಿ ಬಂತು. ಕಣ್ಣು ಬಿಡುತ್ತಿದ್ದಂತೆ ಕಂಡಿದ್ದು ಎದ್ದು ಕುಳಿತಿದ್ದ ಪವಿತ್ರಾ, ರವಿ ಮತ್ತು ಅರವಿಂದ. ನಾನು ಎಚ್ಚರವಾದಂತೆ, ನಾವೇನೋನೋ ಕೇಳಿದ್ವಿ ಕೇಳಿಸ್ಲಿಲ್ವೇನೋ? ನೋಡಿಲ್ಲಿ ಸಿಕ್ಕಾ ಪಟ್ಟೆ ನಡುಗ್ತಿದ್ದೆ ಅಂತ ಇದನ್ನೆಲ್ಲಾ ಹೊದಿಸಿದ್ದೇವೆ ಅಂದಾಗ ಹೋ! ಎಂದದ್ದಷ್ಟೇ ಗೊತ್ತು.. ಮತ್ತೆ ಸ್ವಲ್ಪ ಎದ್ದು ಕೂತೆ.
ಮಲಗಲಿಕ್ಕೆ ಇದ್ಯಾವುದೋ ಕಲ್ಲು ಬಿಡಲಿಲ್ಲವೆಂದೂ, ರಾತ್ರಿ ಅದೇನೋ ನಮ್ಮ ಟೆಂಟಿನ ಸುತ್ತಮುತ್ತ ಓಡಾಡಿತೆಂದೂ ಪವಿತ್ರಾ ಹೇಳುತ್ತಿದ್ದದ್ದೂ, ಅದೆಲ್ಲೋ ಸಿಂಹವೋ, ಹುಲಿಯೋ ಇರಬೇಕೆಂದು ರವಿಯೋ, ಅರವಿಂದನೋ ಹೇಳಿದ್ದು ಕೇಳಿ ನಗು ಬಂದು, ಕೊನೆಗೆ ಅದು ಗಾಳಿಯಿರಬೇಕು ಹೆದರಬೇಕಾದ್ದಿಲ್ಲ ಎಂದು ಹೇಳಿದಾಗ ಸಂಪೂರ್ಣ ಎಚ್ಚರವಾಗಿ ಕೂತದ್ದಾಯಿತು. ಅಷ್ಟರಲ್ಲಿ ರಾಜೀವ್ ಕೂಡ ನಮ್ಮೊಡನೆ ಎದ್ದು ಕುಳಿತು ಹೊರನೆಡೆದು ಕೂರುವ ಸಾಹಸ ಮೆರದಿದ್ದರು. ಇದೆಲ್ಲಾ ನೆಡೆದದ್ದು ಮುಂಜಾನೆ ೩ರ ಸಮಯ. ಮತ್ತೊಮ್ಮೆ ಕ್ಯಾಂಪ್ ಫೈರ್ ಹಚ್ಚುವ ಕೆಲಸ ಶುರುವಾಯ್ತು. ಟೆಂಟ್ ಬಾಗಿಲು ತೆರೆದು ಹೊರನೆಡೆದ ರಾಜೀವ್ ಹಾ! ಮಜವಾಗಿದೆ.. ಈಗ ಚಳಿ ಅನ್ನಿಸ್ತಾ ಇಲ್ಲ ಅಂದದ್ದನ್ನು ಕೇಳಿ ಧೈರ್ಯ ಮಾಡಿ ಹೊರ ಬಂದದ್ದಾಯಿತು. ಆಗಲೇ ಮತ್ತೆ ಮೈ ಕೈ ಎಷ್ಟು ನೋವಾಗಿದೆ ಎಂದು ಮತ್ತೊಮ್ಮೆ ಅರಿವಾದದ್ದು. ಚಳಿ ಕಾಸಿ ಎಲ್ಲರೂ ಇನ್ನೊಂದಿಷ್ಟೊತ್ತು ವಿಶ್ರಾಂತಿ ತೆಗೆದುಕೊಂಡು ಮುಂದುವರೆಯಲು ನಿರ್ಧರಿಸಿ ಮತ್ತೆ ಮಲಗಿದವರು ಎದ್ದೇಳಲಿಕ್ಕಾದದ್ದು ೭:೩೦ ಗೆ..ಒಮ್ಮೆ ಓಡಿ ಬೆಟ್ಟದ ಮೇಲಿಂದ ಅದರ ಸುತ್ತಲಿನ ಪರಿಸರದ ನೋಟವನ್ನು ಕಣ್ಣಲೇ ಸೆರೆ ಹಿಡಿದು, ಜೋರಾಗಿ ಬೀಸುತ್ತಿದ್ದ ಗಾಳಿಗೆ ಎದುರಾಗಿ ನಿಂದು, ಗಾಳಿಯನ್ನು ಸೀಳುತ್ತಾ ಒಂದಿಷ್ಟು ದೂರ ಓಡಿ, ಟೆಂಟ್ ನಿಂದ ಸ್ವಲ್ಪ ದೂರದ ಇಳಿಜಾರಿನಲ್ಲಿ ಓಡಾಡುತ್ತಾ ವಾಪಸ್ ಬಂದು ಕುಳಿತೆ.
ಕಾಫಿ ಕುಡಿದು, ತಿಂಡಿ ತಿಂದು ಕೂರುವುದರೊಳಗೆ ಮತ್ತೊಂದು ಫೋಟೋ ಸೆಷನ್, ಟೆಂಟ್ ಒಳಗಿಂದ, ನಮ್ಮ ಟೆಂಟ್ ನ ಹಿಂದಿನ ತುದಿಗೆ ಹೋಗಿ ಅಲ್ಲಿಂದ ಇತ್ಯಾದಿ ಹೀಗೆ ಕ್ಯಾಮೆರಾ ಕೆಲಸ ಸಾಗಿತ್ತು.. ಅರವಿಂದ ಹಾಗೂ ಪವಿತ್ರಾ ಆಲ್ಬಮ್ ಗಳಲ್ಲಿನ ಚಿತ್ರಗಳು ಸೆರೆಹಿಡಿದಿರುವ ಪ್ರಕೃತಿಯ ಪಟಗಳು ಇನ್ನೂ ನನ್ನನ್ನು ಪಶ್ಚಿಮಘಟ್ಟದ ಹಚ್ಚಹಸುರಿನ ಪ್ರದೇಶದಲ್ಲೇ ಹಿಡಿದಿಡುತ್ತವೆ.
ತಿಂಡಿ ಆಗುತ್ತಿದ್ದಂತೆಯೇ ರವಿಯವರ ಕ್ಯಾಲ್ಕುಲೇಷನ್ ಶುರುವಾಯ್ತು. ರಾತ್ರಿ ಬೆಂಗಳೂರು ತಲುಪಬೇಕೆನ್ನುವ ನಮ್ಮ ಮೊದಲ ಯೋಜನೆ ಮುಂದಿಟ್ಟುಕೊಂಡು ಏನೆಲ್ಲಾ ಸಾಧ್ಯತೆಗಳಿವೆ ನಮ್ಮ ಮುಂದೆ ಎಂದು ಯೋಚಿಸುತ್ತಾ, ನಮ್ಮಲ್ಲಿದ್ದ ನೀರು ಇತ್ಯಾದಿಗಳ ಆಡಿಟಿಂಗ್ ಮಾಡಿ ಸರಿ ನಾವಿನ್ನು ಕೆಳಗೆ ಇಳಿಯುವ ಎಂದಾಗ ಮನ ಹಪಹಪಿಸುತ್ತಿತ್ತು.. ಹಲವಾರು ಬಾರಿ ಹತ್ತಬಹುದು, ಬೇಗ ಹೋಗಿ ಬಂದೇ ಬಿಡಬಹುದು ಎಂದರೂ, ನೀರು ಇತ್ಯಾದಿ ಎಂದು, ಸಮಯದ ಮುಳ್ಳುಗಳ ತೋರಿಸಿ ಅವುಗಳೊಡನೆ ಇಂದು ಮತ್ತೆ ಯುದ್ದ ಸಾಧ್ಯವಿಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಿ.. ಚಾರಣದ ಕೊನೆ ಹಾಡಲು ಬಯಸಿದರು… ಮನಸ್ಸು ಕೊನೆಗೂ ಅಲ್ಲಿಂದ ವಾಪಸ್ ಹೊರಡಲು ಸಿದ್ದವಾಗಲೇ ಬೇಕಾಯಿತು…
ನಮ್ಮ ತಂಡ
ಚಾರಣ, ಅದರ ಸಫಲತೆ ನಾವೆಂದು ಕೊಂಡ ಘಟ್ಟವನ್ನು ತಲುಪಿದಾಗ ಮಾತ್ರವೇನಲ್ಲ.. ಅಲ್ಲಿಯವರೆಗೂ ನಾವೊಂದು ಬಗೆಯ ಹೊಸ ಅನುಭವವನ್ನು ಪಡೆದಿದ್ದವು. ಕಳೆದು ಹೋಗುವುದು, ಹುಡುಕಾಟ, ಕಾಡ ದಾರಿ, ಬೆಳಕಿಲ್ಲದ ರಾತ್ರಿಯಲ್ಲಿ ಮಿಂಚು ಹುಳ ಮಿನುಗಿದ್ದು, ಆ ಬ್ರಹ್ಮಾಂಡದ ಅಗಾಧ ನಕ್ಷತ್ರಗಳ ನಗರದ ಬೆಳಕಿನ ತೊಂದರೆಯಿಲ್ಲದೆ ನೋಡುವ ಭಾಗ್ಯ, ಚಳಿಯಿಂದ ನಡುಗುವಾಗ, ಗದ್ದಲವಾಗಿ ಎಚ್ಚರಗೊಂಡರೂ ನನ್ನ ಸ್ಥಿತಿ ನೋಡಿ ಬೆಚ್ಚಗಿನ ಹಾಸುಗಳನ್ನ ಹೊದಿಸಿದ್ದ ಗೆಳೆಯರ ಸಾಮೀಪ್ಯದಲ್ಲಿ ಅದೇನೋ ಹೊಸ ಧೈರ್ಯ, ಮತ್ತೊಂದಿಷ್ಟು ದಿನ ಇಲ್ಲೇ ಹೀಗೇ ಇದ್ದು ಬಿಡಬಹುದೆಂಬ ಹುಚ್ಚು ಬಂಡತನ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಪಟ್ಟಿ ತಯಾರಾಗುತ್ತಾ ಹೋಗುತ್ತದೆ. ಮುಂದಿನ ಚಾರಣಕ್ಕೆ ಸಿದ್ದತೆಯಂತೆ ಈಗಲೆ ಒಂದು ಚೆಕ್ ಲಿಸ್ಟ ನಮ್ಮ ಮುಂದೆ ದುತ್ ಎಂದು ಎರಗುತ್ತದೆ.
ಟೆಂಟ್ ಬಿಚ್ಚಿ, ಮಡಿಚಿ ಮತ್ತೆ ಎಲ್ಲ ಬ್ಯಾಗ್ ಗಳನ್ನು ಜೋಡಿಸಿ ಕೊಂಡು, ಪೇಪರ್, ಪ್ಲಾಸ್ಟಿಕ್ ಬಾಟಲಿ, ಕವರ್ ಇತ್ಯಾದಿಗಳನ್ನೆಲ್ಲಾ ಮತ್ತೊಂದೆರಡು ದೊಡ್ಡ ಕವರ್ ಗಳಿಗೆ ತುಂಬಿಕೊಂಡು, ಬೆಂಕಿ ನಂದಿದೆಯೇ ನೋಡಿಕೊಂಡು ಮತ್ತೊಮ್ಮೆ ಅಲ್ಲಿನ ಸ್ವಚ್ಚಂದಗಾಳಿಯನ್ನು ಹೀರಿ ಹೊರಟು ನಿಂತೆವು. ಪ್ಲಾಸ್ಟಿಕ್ ಪೇಪರ್, ಬಾಟಲಿಗಳು, ಅಲ್ಲಿ ಹಚ್ಚಿದ್ದ ಬೆಂಕಿ ಇತ್ಯಾದಿಗಳ ಬಗ್ಗೆ ರವಿ ಮತ್ತು ಅರವಿಂದ ತೋರಿದ ಕಾಳಜಿ ಬಗ್ಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು. ನಾವು ಇದೇ ರೀತಿ ಎಲ್ಲೆಡೆಯೂ, ಎಲ್ಲರೂ ಯೋಚಿಸಿದಲ್ಲಿ ನಮ್ಮ ಪರಿಸರ ಸುಂದರವಾಗಿಯೇ ಇರುವುದಲ್ಲವೇ? ನಾವೇಕೆ ಇದನ್ನು ಚಿಂತಿಸುವುದಿಲ್ಲ ಎಂದೆಂದಿತು ನನ್ನ ಮನ.
ಅದೇ ದಾರಿಯಲ್ಲಿ ಹಿಂತಿರುಗಿ, ಕವಲುದಾರಿಗೆ ಮತ್ತೆ ಬಂದು ನಿಂತೆವು. ಅಲ್ಲಿ ಕಟ್ಟಿದ್ದ ಸಣ್ಣ ಕಲ್ಲಿನ ಗೂಡು ಅಲ್ಲೇ ಇದ್ದದ್ದನ್ನು ಕಂಡು ಕೊಂಚ ನಿಂತು ಬಂದ ದಾರಿಯಲ್ಲಿ ವಾಪಸ್ ಹೋಗುವುದರ ಬದಲು ಅದರ ವಿರುದ್ದದ ದಿಕ್ಕಿನ ಕಡೆ ನೆಡೆಯುವ ಆಲೋಚನೆ ಮಾಡಿದೆವು. ಮತ್ತೊಮ್ಮೆ ನಾವು ಮೊದಲು ನೋಡಿದ ವ್ಯೂವ್ ಪಾಯಿಂಟ್ ನಿಂದ ಸಾಗಿ.. ಆ ದಾರಿ ಕೆಳಗೆ ಸಾಗುತ್ತಿದೆ ಎಂದು ನೋಡುತ್ತಲೇ ಮುಂದೆ ಸಾಗಿದೆವು. ಇಲ್ಲೆಲ್ಲೂ ನೀರು, ಜಿಗಣೆಯ ಕುರುವಿಲ್ಲದ ಸಾಮಾನ್ಯ ದಾರಿ ಇದ್ದದ್ದು ಕಂಡು ಬಂತು. ಕೆಳಗೆ ಇಳಿಯುತ್ತಾ, ಇಳಿಯುತ್ತಾ ಮತ್ತೊಂದು ಕವಲು ದಾರಿ. ಮತ್ತೊಮ್ಮೆ ಅದರಲ್ಲೂ ಒಂದು ಆಯ್ಕೆ, ಮುಂದೆ ಬರುತ್ತಿದ್ದಂತೆ ಕಂಡಿದ್ದು ಕೆರೆ ಇರುವ, ಅಲ್ಲೇ ಪಕ್ಕದಲ್ಲಿ ಗುಡಿಯೊಂದಿರುವ ಪ್ರದೇಶ. ಅಲ್ಲೇ ನಿಂತು ಕೆರೆಯ ನೀರಬಳಿ ಸಾರಿ. ಗುಡಿಯೊಳಗೆ ಯಾರೂ ಇರುವುದಿಲ್ಲವೇನೋ, ಹಬ್ಬಕ್ಕೆ ಮಾತ್ರ ಇಲ್ಲಿ ಜನ ಸೇರಬಹುದೆಂದೂ ಮಾತನಾಡುತ್ತ ಮುಂದೆ ಸಾಗಿದೆವು. ಅದೇ ಸಮಯದಲ್ಲಿ ರವಿ ಭೂತಾರಾಧನೆ ಇತ್ಯಾದಿ ಆಚರಣೆಗಳ ಬಗ್ಗೆ ಒಂದೆರಡು ವಿಷಯಗಳನ್ನು ಅರವಿಂದನೊಡನೆ ಹಂಚಿಕೊಳ್ಳಲು ಶುರು ಮಾಡಿದರು. ಅಲ್ಲಿ ಶುರುವಾಯ್ತೊಂದು ಪಂದ್ಯ.. ಆ ದೇವಾಲಯದ ಮೆಟ್ಟಿಲುಗಳನ್ನು ಮೊದಲು ಏರುವವರಾರು?
ಭಾರದ ಬ್ಯಾಗನ್ನು ಹೊತ್ತಿದ್ದರೂ, ಎಲ್ಲರಿಗೂ ಮೊದಲು ಮೇಲೇರುವಾಸೆ. ಆದರೆ ಈ ಪಂದ್ಯಕ್ಕೆ ಮುಂದೆ ಬಂದವರು ನಾನು, ಪವಿತ್ರ ಮತ್ತೆ ಅರವಿಂದ ಮಾತ್ರ…. ಅವರನ್ನೆಲ್ಲಾ ಹಿಂದಿಕ್ಕಿ ಮುಂದೆ ಓಡಿದ ನಾನು ಅವರನ್ನೆಲ್ಲಾ ಮತ್ತೆ ಮತ್ತೆ ಬೇಗ ಬರಲು ಹೇಳುವಷ್ಟರಲ್ಲಿ, ದೇವಾಲಯದ ಒಳಗಿಂದ ಒಂದಿಬ್ಬರು ಮಾತನಾಡುವ ಧ್ವನಿಯನ್ನು ನಾನು ಮತ್ತು ಅರವಿಂದ ಕೇಳಿದೆವು. ಎಲ್ಲರೂ ಒಟ್ಟಿಗೆ ಒಳಗೆ ಹೋಗಿ ದೇವರ ದರ್ಶನ ಮಾಡಿದೆವು. ಇದು ಕಾಳ ಭೈರವನ ದೇವಾಲಯ. ೯೦೦ ವರ್ಷಗಳೆಂದು ನಮಗೆ ದೇವರ ಪ್ರಸಾದ ನೀಡಿದ ಅಲ್ಲಿನ ಅರ್ಚಕರು ಹೇಳಿದರು.
ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಹೊತ್ತು ತಂಗಿದ್ದು, ಅಲ್ಲಿಂದ ಸುಂಕಸಾಲೆಗೆ ಹೋಗುವ ದಾರಿ ಕೇಳಿದಾಗ, ಅಲ್ಲಿಗೆ ೨ ಕಿ.ಮಿ ಕಡಿಮೆಯಾಗುವ ಕಡಿದಾದ ಮಾರ್ಗವೊಂದನ್ನು ಅಲ್ಲೇ ಇದ್ದವರೊಬ್ಬರು ತಿಳಿಸಿ ನಮ್ಮನ್ನು ಆ ರಸ್ತೆ ಶುರುವಾಗುವವರೆಗೆ ಬಿಟ್ಟು ನೆಡೆದರು.
ನಾವು ದೇವಸ್ಥಾನದಲ್ಲಿದ್ದ ಸಮಯದಲ್ಲಿ ಅಲ್ಲಿವರೆಗೆ ಬಂದ ಜೀಪ್ ಒಂದು ನಮಗೆ ಆಶ್ಚರ್ಯ ತಂದಿತ್ತು. ಅದು “ಘಾಟಿ ಕಲ್ಲು” ತಂಡದವರದ್ದಾಗಿದ್ದು, ಬಲ್ಲಾಳರಾಯನ ದುರ್ಗ ಇತ್ಯಾದಿಗೆ ಜನರನ್ನು ಚಾರಣಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು. ನಾವು ಅಲ್ಲಿಗೆ ಹೋಗಲಿಕ್ಕಾಗದ್ದು ಇತ್ಯಾದಿ ತಿಳಿಸಿ, ಅವರ ವಿಳಾಸ ಪಡೆದು, ಅಲ್ಲಿನ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕಿದೆವು. ಮುಂದೆ ಬರುವಾಗ ಜೀಪ್ ಓಡಿಸಿಕೊಂಡು ಬರುವುದೆಂದು ರವಿಗೆ ಈಗಾಗಲೇ ೨-೩ ಬಾರಿ ಹೇಳಿದ್ದೆ.
ನಮ್ಮ ಕೆಳಗಿಳಿಯುವ ಆಟ ಸಾಗಿತ್ತು. ಕಲ್ಲುಗಳೇ ಹೆಚ್ಚಿದ್ದ ಆ ರಸ್ತೆ ಬೇಗ ಬೇಗ ನಮ್ಮನ್ನು ಕೆಳಗೆ ಕರೆದೊಯ್ಯುವ ಸೂಚನೆಯನ್ನೂ ತೋರಿತ್ತು.. ಮುಂದೆ ಅಲ್ಲಲ್ಲಿ ಕೇಳ ಸಿಕ್ಕ ಹಕ್ಕಿಗಳ ಹಾಡು ಕೇಳುತ್ತಾ, ಹೂ, ಗಿಡ ಮರ ನೋಡುತ್ತಾ ಮುಂದೆ ಸಾಗಿದೆವು. ಒಂದರ್ಧ ಘಂಟೆ ಆಗಿರಬಹುದು ನಂತರ ಒಂದಿಷ್ಟು ಮನೆಗಳು ಅಲ್ಲಲ್ಲಿ ಕಂಡು ಬಂದವು., ಅಲ್ಲಿ ಸಿಕ್ಕ ಹುಡುಗರನ್ನು ಮಾತಾಡಿಸುತ್ತಾ, ಮುಂದೆ ನೆಡೆಯುವಾಗ ಕಾಲಿನಡಿಯ ಒಂದು ಕಲ್ಲು ಜಾರಿ ನನ್ನ ಬಲಗೈ ಸರಿಯಾಗಿ ನೋವಾಯಿತು.. ಇಂದೇ ನನಗೆ ಆ ನೋವಿ ಮಾಯಾವಾಗಿರುವಂತನಿಸುತ್ತಿರುವುದು. ಅಬ್ಬಾ… ರೆಲಿ ಸ್ಪ್ರೇ ಇತ್ಯಾದಿಗಳು ಏನೂ ಪರಿಣಾಮ ಬೀರದಿದ್ದರೂ, ಅವುಗಳನ್ನು ಸೋಕಿಸಿದಾಗ ಕೊಂಚ ನೋವು ಕಡಿಮೆ ಆದಂತನಿಸಿತ್ತಷ್ಟೇ.
ಮಧ್ಯಾನ್ಹ ೧ರ ಹೊತ್ತಿಗೆ ಅಜ್ಜಿ ಮನೆಗೆ ಸೇರಿದ ನಾವು, ಅಜ್ಜಿಗೆ ನಮ್ಮ ಚಾರಣದ ಬಗ್ಗೆ ಹೇಳಿ, ಅವರೊಡನೆ ಸ್ವಲ್ಪ ಮಾತನಾಡಿ ನೀರು ಕುಡಿದು ಬೆಂಗಳೂರಿನ ಕಡೆಗೆ ಹೊರಡಲು ತಯಾರಿ ನೆಡೆಸಿದೆವು. ಹೋಗುವಾಗ ಹೇಮಾವತಿ ನದಿಯ ಉಗಮ ಸ್ಥಾನ ನೋಡುವ ಯೋಜನೆ ಕೂಡ ಇತ್ತು. ಅಜ್ಜಿಗೆ ಮತ್ತು ಅವರ ಸೊಸೆಗೆ ವಿಧಾಯ ಹೇಳಿ ನಮ್ಮ ಲಗ್ಗೇಜ್ ಗಾಡಿಗೆ ಹೇರಿ ಹೊರಟ ನಾವು ಮತ್ತೆ ನಿಂತದ್ದು ಕೆಳಗೂರು ಕಾಫಿ ಎಸ್ಟೇಟ್ ನ ಅಂಗಡಿಯ ಬಳಿಯಲ್ಲೇ. ಅಲ್ಲಿ ಬಂದು ಒಂದಿಷ್ಟು ತಾಜಾ ಕಾಫಿ, ಟೀ ಇತ್ಯಾದಿ ಕುಡಿದು ಅಲ್ಲೇ ತಯಾರಿಸಿ ಪ್ಯಾಕ್ ಮಾಡಿದ್ದ ಪುಡಿ, ಮಸಾಲೆ, ನೆಲ್ಲಿಯ ಸಿಹಿ ತಿಂಡಿ ಇತ್ಯಾದಿ ಕೊಂಡು, ಇಡ್ಲಿ ತಿಂದು ಹೊರಡುವಾಗ ಸುಸ್ತಾಗಿ ರಾಜೀವ್ ಗೆ ನನ್ನ ಕಾರ್ ಕೀ ಕೊಟ್ಟಿಯಾಗಿತ್ತು. ಅಲ್ಲಿಂದ ನನಗೆ ಮತ್ತೆ ಸ್ವಲ್ಪ ವಿಶ್ರಾಂತಿ.. ಸಂಜೆ ೮-೯ ಘಂಟೆಗೆ ಬೆಂಗಳೂರು ತಲುಪಲೇ ಬೇಕೆಂದು ನಿರ್ಧರಿಸಿದ್ದ ರಾಜೀವ್ ಬರ್ಜರಿಯಾಗಿ ಕಾರ್ ಚಲಾಯಿಸಲಿಕ್ಕೆ ಶುರು ಮಾಡಿದರು.
ರಸ್ತೆ ಮಧ್ಯದಲ್ಲಿ ಮತ್ತೆ ಮಾತು ಶುರು, ಚಾರಣ ಹೇಗಿತ್ತು ಇಂದ ಶುರು ಮಾಡಿ, ಮತ್ತೊಮ್ಮೆ ನನ್ನನ್ನು ಬಲ್ಲಾಳರಾಯನ ದುರ್ಗ ಮತ್ತು ಬಂಡಾಜೆ ಜಲಾಶಯಕ್ಕೆ ಕರೆದು ಕೊಂಡೇಬರಬೇಕು, ನಾವದನ್ನೆಲ್ಲಾ ನೋಡಲೇ ಬೇಕು ಹಾಗೂ ಇದೇ ತಂಡ ಬರಬೇಕು ಎಂದು ವಚನ ತೆಗೆದು ಕೊಂಡ ಪವಿತ್ರಾ, ಎಲ್ಲರ ಬಾಯಿಂದ ಒಂದಿಷ್ಟು ಮಾತುಗಳನ್ನು ಎಳೆಯದೆ ಬಿಡಲಿಲ್ಲ. ಮಾತು ಸಾಗುತ್ತಲೇ ಇತ್ತು.. ನಡುವೊಮ್ಮೆ ಕಾಫಿಗೆ ನಿಲ್ಲಿಸಿ, ಮತ್ತೆ ಕಾರ್ ನನ್ನ ಸುಪರ್ದಿಗೆ ತೆಗೆದು ಕೊಂಡು ಅದೇ ವೇಗದಲ್ಲಿ ಬೆಂಗಳೂರಿಗೆ ದೌಡಾಯಿಸಿದರೂ ನಮ್ಮ ರಸ್ತೆ ಅಭಿವೃದ್ದಿ ಪ್ರಾಧಿಕಾರದ ಕೃಪೆಗೆ ಮತ್ತೆ ಪಾತ್ರರಾಗಿ, ತುಮಕೂರಿನ ಬೋರ್ಡ್ ಕಂಡಾಗಲೇ ನಾನು ಮತ್ತು ರವಿ ರಸ್ತೆಯ ಬಗ್ಗೆ ಮತ್ತೊಮ್ಮೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದು..
ಅಂತೂ ಇಂತೂ ಚಾರಣ ಕೊನೆಯ ಹಂತಕ್ಕೆ ಬಂದಿತ್ತು.. ಎಲ್ಲರನ್ನೂ ಮನೆಗೆ ಸೇರಿಸಿ ನಾನು ಮನೆ ಸೇರಿದ್ದು ೧.೩೦ರ ಬೆಳಗ್ಗೆ…. ನಾನಿನ್ನೂ ಅಲ್ಲೇ ಇದ್ದೇನೆಯೇ? ಡ್ರೈವ್ ಮಾಡ್ತಾ…..
Rasika Baaro team had organized “Chaitrodaya – G S Shivarudrappa Kaavyavaachana” program on 27th December, 09 at Ravindra Kalakshetra. Renowned names from various different fields attended this event and read out poems written by Raashtra Kavi G S Shivarudrappa to pay a much needed tribute. It was a great pleasure and treat. Got a chance to listen to few of my favorite poems written by GSS. GSS documentary was also played at the end of the event.
I got a chance to live tweet the happenings of this event and you can find the same on my twitter account http://twitter.com/omshivaprakash . I have tried my best to tag the postings with #chitrodaya and #kannada.
My HTC tattoo allowed me to record few moments of this event and here I present them for you. Listen to them and enjoy…
ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….
ತುಮಕೂರು ತಲುಪುವುದರಲ್ಲಿ ಮೊದಲ ಅಡೆತಡೆ… ರಸ್ತೆ ಅಗಲೀಕರಣ ಇತ್ಯಾದಿಗೆ ಮುಂದಾಗಿರುವಲ್ಲಿ ಜನ ಸಾಮಾನ್ಯರಿಗೆ ಸರಿಯಾದ ಮಾರ್ಗದರ್ಶಿಗಳನ್ನು ಹಾಕುವ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ನಮ್ಮನ್ನು NH200 ಬದಲಿಗೆ ರಾಜ್ಯಹೆದ್ದಾರಿಯಲ್ಲಿ ತೂರಿಬಿಡುವ ಕಾರ್ಯವನ್ನು ಅಭಿವೃದ್ದಿ ಪ್ರಾಧಿಕಾರಗಳು ಮಾಡಿ ಗೆದ್ದದ್ದಾಗಿತ್ತು… ಅಷ್ಟರಲ್ಲಿ ಜಿ.ಪಿ.ಎಸ್ ಡಿವೈಸ್ ತೋರಿಸುತ್ತಿದ್ದ ದಾರಿಯನ್ನು ಅರ್ಧಂಬರ್ದ ಮನಸ್ಸಿನಿಂದಲೇ ಹೇಳಿದಾಗ, ರವಿ ಇದ್ದಕ್ಕಿದ್ದಂತೆ ಆಕ್ಟೀವ್ ಆಗಿ ನಮ್ಮ ಲೋಕಲ್ ಗೂಗಲ್ ಮುಂದೆ ನಿಮ್ಮದ್ಯಾವ ಗೂಗಲ್ ಹೇಳಿ ಎಂದೆನ್ನುತ್ತಾ ೩:೩೦ – ೪:೦೦ ರ ಆ ತಾಸಿನಲ್ಲಿ ನೆಡೆದಾಡುವ ಮನುಷ್ಯರ ಸುಳಿವಿನಲ್ಲಿ ಕಣ್ಣಾಡಿಸಿದರು… ಅಂತೂ ಇಂತು ನಾವು ಹೋಗುತ್ತಿರುವ ದಾರಿ ಕಡೆಗೂ ನಮ್ಮನ್ನು ಮುಂದೆ ಹಾಸನದ ದಾರಿಗೆ ಸೇರಿಸುತ್ತದೆ ಎಂದು ಅರ್ಥವಾದೊಡನೆ ಹಿಂದಿನ ಸೀಟಿನಲ್ಲಿದ್ದವರೆಲ್ಲ ಮೆಲ್ಲನೆ ನಿದ್ದೆಗೆ ಜಾರುತ್ತಿದ್ದದ್ದು ಕಂಡುಬಂತು.. ಅರವಿಂದ ಎಚ್ಚರ ಇದ್ದ ಅನ್ಕೊಂಳ್ತೀನಿ ಅವನು ಮಲಗಿದ್ದೇ ಬೆಳಗ್ಗೆ ಸ್ವಲ್ಪ ಹೊತ್ತು…..
ಬೆಳಗ್ಗೆ ಸೂರ್ಯ ಕಣ್ಣರಳಿಸಿ ನಮ್ಮನ್ನು ಕದ್ದುಮುಚ್ಚಿ ನೋಡುವುದರೊಳಗೆ ನಾವು ಹಾಸನ ತಲುಪಿ ಕಾಮತ್ ಗೆ ದಾಳಿಯಿಟ್ಟಾಗಿತ್ತು… ಅಲ್ಲಿ ಕಂಡ ಉಯ್ಯಾಲೆ ಇತ್ಯಾದಿ ನನ್ನನ್ನು ಮಗು ಮಾಡಿ, ಅದರಲ್ಲಿ ನನ್ನನಾಡಿಸಿದ್ದಂತೂ ನಿಜ. ಇಡ್ಲಿ ವಡೆ ತಿಂದು, ಚಾ, ಕಾಫಿ ಕುಡಿದು ಹೊರನೆಡೆದ ತಂಡ ಸಂಪೂರ್ಣ ಎಚ್ಚರವಾಗಿದ್ದಂತೂ ಸ್ಪಷ್ಟವಾಗಿ ಕಂಡುಬಂತು… ಇನ್ನೇನು ನಾವು ಸೇರಬೇಕಿರುವ ಜಾಗ ಸೇರಲು ಮತ್ತೊಂದು ಘಂಟೆ ಮಾತ್ರ ಎಂದು ಹೊರಟು ನಿಂತೆವು..
ಸೂರ್ಯನ ಕಿರಣಗಳು ತೀಕ್ಷ್ಣವಾಗುತ್ತಿದ್ದಂತೆ ಬೇಗ ಸೇರಬೇಕೆನ್ನುವ ಆಸೆ ಹೆಚ್ಚಾಗುತ್ತಿತ್ತು.. ಬಂಡಾಜೆ ಜಲಪಾತ ಮತ್ತು ಬಲ್ಲಾಳರಾಯನ ದುರ್ಗವಿರುವ ಪಶ್ಚಿಮ ಘಟ್ಟದ ಆ ಶ್ರೇಣಿಯನ್ನು ಉಜಿರೆಯಿಂದ ೧೩ ಕಿ.ಮಿ ದೂರ ವಿರುವ ಬಂಡಾಜೆ ಗ್ರಾಮದಿಂದ ಅಥವಾ ಅದರ ಇನ್ನೊಂದು ಮಗ್ಗುಲಲ್ಲಿರುವ ಸುಂಕಸಾಲೆ ಇಂದ ಹತ್ತಬಹುದು.. ಬಂಡಾಜೆಗೆ ಹೊರಟರೆ ಅಲ್ಲಿಂದ ನೇರವಾಗಿ ಜಲಪಾತದ ಕಡೆ ಹೊರಟು ಅಲ್ಲೇ ಟೆಂಟ್ ಹಾಕಬೇಕಾಗುತ್ತೆ ಮತ್ತೆ ನಾಳೆ ವಾಪಸ್ ಬರುವುದಷ್ಟೇ, ಸುಂಕಸಾಲೆ ಇಂದ ಹೊರಟು, ಬಲ್ಲಾಳರಾಯನ ದುರ್ಗಕ್ಕೆ ಸಾಗಿ ಅಲ್ಲಿಂದ ಮುಂದೆ ಜಲಪಾತದ ಸುತ್ತಮುತ್ತ ಎಲ್ಲಾದರೂ ಟೆಂಟ್ ಹಾಕಿ ಊಟ ನಿದ್ರೆ ಮಾಡಿ ಬೆಳಗ್ಗೆ ಜಲಪಾತದ ಬಳಿ ಸಾರಿ ನಂತರ ಇಳಿದು ಬರುವುದು ಎಂದಾಗಿತ್ತು.. ಆದ್ದರಿಂದ ಕಳಸಕ್ಕೆ ಹೊಗುವ ರಸ್ತೆಯಲ್ಲಿ ಮುಂದುವರೆದು ಕೆಳಗೂರು ಕಾಫಿ ಎಸ್ಟೇಟ್ ಮಾರ್ಗವಾಗಿ ಸುಂಕಸಾಲೆ ತಲುಪಿದೆವು… ಮಾರ್ಗಮಧ್ಯದ ತಿರುವುಗಳಲ್ಲಿ ನಾನು ಡ್ರೈವಿಂಗ್ ಆನಂದ ಪಡೆದದ್ದು ಕೆಲವರ ಹಣೆಯಲ್ಲಿ ನೀರು ತರಿಸಿತ್ತಾದರೂ ಖಾಲಿ ಇದ್ದ ರಸ್ತೆಗಳು ಸ್ವಲ್ಪ ಸಮಾಧಾನ ತಂದು ಖುಷಿ ಕೊಟ್ಟಿತು ಎಂದು ಕೊಳ್ತೇನೆ .
ರಸ್ತೆ ಕಡಿದಾಗ್ತಾ ಬಂದು ಇನ್ಮುಂದೆ ಕಾರಿನಲ್ಲಿ ಸಾಗೋದು ಕಷ್ಟ ಆಗಬಹುದು ಎಂದೆನಿಸುತ್ತಲೇ ಅಲ್ಲಲ್ಲಿ ಕಂಡು ಬಂದ ಕೊನೆಯ ಒಂದಿಷ್ಟು ಮನೆಗಳ ಸುತ್ತ ಕಣ್ಣಾಡಿಸುತ್ತಾ.. ಇನ್ನೇನು ಇದೇ ಕೊನೆಯ ಮನೆಯಿರಬಹುದೆಂದು ಕೊಂಡು ಅಜ್ಜಿಯ ಮನೆಯೊಂದರಲ್ಲಿ ನಮ್ಮ ಕಾರನ್ನು ಪಾರ್ಕ್ ಮಾಡಿದ್ದಾಯ್ತು.
ಪ್ರೀತಿಯಿಂದ ನಮ್ಮನ್ನು ವಿಚಾರಿಸಿಕೊಂಡ ಅಜ್ಜಿ ಮುಂದೆ ಹೋಗಲಿಕ್ಕೆ ಸ್ವಲ್ಪ ಕಷ್ಟ ಆಗಬಹುದೆಂದೂ, ನಿಮ್ಮ ಕಾರ್ ಬಿಟ್ಟು ಹೋಗಿ, ತೊಂದರೆ ಇಲ್ಲ ಎಂದು ಹೇಳಿ ನಮ್ಮನ್ನು ಮುಂದಿನ ಪಯಣಕ್ಕೆ ಅಣಿಯಾಗಲೆಣಿಸಿದರು. ಬೆಂಗಳೂರಿನಿಂದ ಹೊತ್ತು ತಂದಿದ್ದ ಬ್ಯಾಗ್ ಗಳ ಜೊತೆ ೩-೪ ಹೊತ್ತಿಗೆ ಬೇಕಿರುವ ಊಟದ ಸಾಮಗ್ರಿಗಳು, ನೀರು ಇತ್ಯಾದಿಗಳನ್ನು ಹೆಗಲಿಗೇರಿಸಿಕೊಂಡು, ಚಾಕೋಲೇಟ್ ಇತ್ಯಾದಿ ಪವಿತ್ರಾಳ ಬ್ಯಾಗಿಗೆ ತುಂಬಿ ಮುಂದಿನ ದಾರಿ ಎಣಿಸಿದೆವು.. ಇಲ್ಲಿಂದ ಮುಂದೆ ಸಿಕ್ಕ ಒಂದಿಬ್ಬರ ಸಲಹೆಯಂತೆ ಹೊರಿಕಾನ್ ಎಸ್ಟೇಟ್ ಬಂಗ್ಲೆ ಅಥವಾ ಕಾಳಬೈರವನ ಗುಡಿಯ ಮೂಲಕ ನಾವು ಬಲ್ಲಾಳರಾಯನ ದುರ್ಗ ಸೇರಬಹುದಾಗಿತ್ತು.. ನಾವು ಹೊರಟದಾರಿ ನಮ್ಮನ್ನು ಸಣ್ಣದೊಂದು ಹೊಳೆಯಗುಂಟ ಹೊರಿಕಾನ್ ಎಸ್ಟೇಟ್ ಬಂಗ್ಲೆಯ ಮಾರ್ಗವಾಗಿ ಕೊಂಡೊಯ್ದಿತು..
ಇಷ್ಟರಲ್ಲಾಗಲೇ ನಮ್ಮ ತಂಡದ ಕ್ಯಾಮೆರಾ ಕಣ್ಣುಗಳು, ಸಂಶೋದಕರ ಕಣ್ಣುಗಳು ಮಲೆನಾಡಿನ ಇಂಚಿಂಚನ್ನೂ ಕ್ಲಿಕ್ಗಳ ಮೂಲಕವೇ ಕಟ್ಟಿಹಾಕುವ ಹುನ್ನಾರ ತೋರಿದ್ದು ನಿಮಗೆ ಈ ಚಿತ್ರದ ಮೂಲಕ ಕಂಡು ಬರುತ್ತದೆ. ಪವಿತ್ರಾಗೆ ಹೂಗಳ ಮೇಲೆ ಕಣ್ಣೊರಳಿದರೆ, ಅರವಿಂದನಿಗೆ ಚಿಟ್ಟೆ, ಹುಳು ಉಪ್ಪಟೆಗಳ ಚಿತ್ರಗಳನ್ನು ಕಲೆಯಾಕುವ ಕೆಲಸ. ನನಗೆ ಅವರನ್ನೆಲ್ಲಾ ಸೆರೆಹಿಡಿಯುವ ಕಾಯಕ.
ಈಗಾಗಲೇ ಬಂಡಾಜೆಗೆ ಹಲವಾರು ಬಾರಿ ಹೋಗಿ ಬಂದಿದ್ದ ರವಿ ಮತ್ತು ಅರವಿಂದ ನಮ್ಮನ್ನು ಮುನ್ನೆಡೆಸಿದ್ದು, ಗೈಡ್ ಇಲ್ಲದೆ ಹಾದಿ ಕಂಡುಹಿಡಿಯುವ ಪರಿ ನನಗೆ ತೀರಾ ಹೊಸದು. ಮೇಲೆ ಹೋದಂತೆ ಇದು ನನಗೂ ಅಭ್ಯಾಸವಾಯ್ತು…
ಹುರಿಕಾನ್ ಎಸ್ಟೇಟ್ ಮೂಲಕ ಹಾದು ಹೋಗುತ್ತಿದ್ದಂತೆ ನಾವೆಲ್ಲೋ ಕಳೆದು ಹೋದ ಅನುಭವ… ಪೂರಾ ಖುಷಿ ಆಗಿದ್ದು ಪವಿತ್ರಾಗೆ.. ಕಳೆದು ಹೋಗಬೇಕು ಅಂತಿದ್ದದ್ದದ್ದು ಅವಳೇ ಮುಂದೆ ಅಲ್ಲಲ್ಲೇ ಕಂಡು ಬಂದ ಮನುಷ್ಯ ನೆಡೆದಿರಬಹುದಾದ ಹುಲ್ಲು ಹುಟ್ಟದ ಹಾದಿಗಳು ಕಂಡಂತೆಲ್ಲಾ, ಅದನ್ನು ಸರ್ವೇ ಮಾಡಿ ಮುಂದೆ ಎತ್ತ ಸಾಗುತ್ತಿರಬಹುದು ಎಂದೆಣೆಸುತ್ತಾ, ಅದು ಮೇಲೆ ಕೆಳಗೆ ಹೊದಂತೆಲ್ಲಾ ಮತ್ತೆ ನಿಂದು ಸಾವರಿಸಿಕೊಂಡು, ರಾಜೀವ್ ಆಗಾಗ್ಗೆ ಕೊಡುತ್ತಿದ್ದ ನಿಂಬೆ ಹುಳಿಯ ತಿಂದು ಹಂತ ಹಂತವಾಗಿ ಸೆಕೆ ಇಂದ ತೋಯುತ್ತಿದ್ದ ಮೈ ಮನಕ್ಕೆ ಹಿತವಾಗಿ ಬೀಸಿದ ಗಾಳಿಯ ಆಸ್ವಾದಿಸುತ್ತಾ ಮುನ್ನೆಡೆದಂತೆ ನಮ್ಮ ಹಾದಿಯಲ್ಲಿ ಸಿಕ್ಕಿದ್ದು ಸಣ್ಣ ಸಣ್ಣ ನೀರ ಝರಿಗಳು.. ಅಲ್ಲೇ ಮನೆ ಮಾಡಿದ್ದ ಜಿಗಣೆಗಳು ಕಾಲಮೇಲೆ ಹತ್ತಿದಂತೆಲ್ಲಾ ಮೊದಲೊಮ್ಮೆ ಚಾರಣದಲ್ಲಿ ಜಿಗಣೆಯೊಡನೆ ಆಟವಾಡಿದ್ದ ಪವಿತ್ರಾಗೆ ಅವನ್ನು ಕಂಡರೆ ಕೋಪದ ಜೊತೆ ಭಯವೂ ಇದ್ದದ್ದು ಗೊತ್ತಾಯಿತು.. ಹತ್ತಿ ಹರಿಯುತ್ತಿದ್ದ ಜಿಗಣೆಗಳನ್ನು ಅರವಿಂದ ಮತ್ತು ರವಿ ಕೇರ್ ಮಾಡದೆ ತೆಗೆದು ಎಸೆದರೂ ಕಡೆಗೆ ಅವುಗಳನ್ನು ಸಹಿಸದ ಪವಿತ್ರಾಗೆ ಅಲ್ಲೇ ಸಿಕ್ಕ ದೊಡ್ಡ ಕಡ್ಡಿಯೊಂದನ್ನು ರವಿ ಆಯುಧವಾಗಿ ನೀಡಿದರು.. ನಮ್ಮ ಯಾತ್ರೆ ಮುಂದೆ ಸಾಗಿತು.. ಮಧ್ಯೆ ಕಿತ್ತಳೆ ಹಣ್ಣು ನಮ್ಮ ದಾಹವನ್ನು ಹಿಂಗಿಸಿತ್ತು.
ಇಷ್ಟರಲ್ಲಾಗಲೇ ಮೂರು ಘಂಟೆಯ ಸಮಯ.. ಮಧ್ಯಾನ ಬೇರೇನೂ ತಿಂದದ್ದಿಲ್ಲ.. ಕಾಡಿನ ಮಧ್ಯದ ದಾರಿ ಬಿಟ್ಟರೆ ಬೇರೆ ಕುರುಹುಗಳಿಲ್ಲ.. ಆಗಾಗ ಅಲ್ಲಲ್ಲಿ ತುಂಬಾ ವಿರಳವಾಗಿ ಕಂಡು ಬಂದ ಬಟ್ಟೆ ಇತ್ಯಾದಿ ಮಾತ್ರ ಇಲ್ಲಿ ಮನುಷ್ಯರು ಓಡಾಡಿದ್ದಿರಬಹುದೆಂಬ ಮಾಹಿತಿ ನೀಡುತ್ತಿತ್ತು. ಇನ್ನೇನು ವಾಪಸ್ ಬಂದು ಬಂಡಾಜೆಯ ಮಾಮೂಲಿ ರೂಟ್ ಹಿಡಿಯುವುದೇ ಅಥವಾ ಏನು ಮಾಡುವುದು, ಇನ್ಯಾರಾದರೂ ಸಿಕ್ಕಾರೇ ಎಂದು ಲೆಕ್ಕ ಹಾಕುತ್ತಿದ್ದ ನಮಗೆ, ದೀರ್ಘವಾಗಿ ಮುಂದೆ ಸಾಗುತ್ತಿದ್ದ ಹಾದಿಯೊಂದು ಮುಚ್ಚಿಯೇ ಹೋಗಿದೆ ಎಂದೆನಿಸುತ್ತಿದ್ದ ಕಾಡಿನ ರಸ್ತೆಯ ಮಧ್ಯದಲ್ಲಿನ ಗಿಡಗಂಟಿಗಳನ್ನು ಸರಿಸಿ ನೋಡಿದಾಗ ಕಂಡುಬಂತು… ಹಾಗೆಯೇ ಮುಂದೆ ಸಾಗಿ ನಿಂತಾಗ ಮತ್ತೆರಡು ಜೋಡು ರಸ್ತೆ… ಒಂದು ಮೇಲಕ್ಕೂ, ಮತ್ತೊಂದು ಕೆಳಕ್ಕೂ ಹೊರಟಂತೆ… ಅಲ್ಲೇ ನಿಂತ ಎಲ್ಲರಿಗೂ ಏನು ಮಾಡುವುದೆಂಬ ಸಂದೇಹ.. ಸರಿ ದಣಿವಾರಿಸಿಕೊಳ್ಳಲು ಮತ್ತೊಂದು ನೆವ… ನಿಂತದ್ದಾಯಿತು.. ನಿಲ್ಲಲು ಮನಸ್ಸೇ ಇರದಿದ್ದ ನಾನು ಕೆಳಗೆ ಸರಿಯುವಂತಿದ್ದ ದಾರಿಯಲ್ಲಿ ನೆಡೆದು ನೋಡುವಂತಾಗಿ ಅಲ್ಲೇ ಯಾರೋ ಹಾಕಿದ್ದ ಕ್ಯಾಂಪ್ ಫೈರ್ ನ ಗುರುತು… ಖುಷಿ… ಹಾಗೇ ಮುಂದೆ ಸಾಗಿ ಅಲ್ಲೇ ಕಂಡು ಬಂದ ನಿಸರ್ಗದ ಸುಂದರ ನೋಟ… ಆದ ಸಂತಸಕ್ಕೆ ಪಾರವೇ ಇಲ್ಲ.. ಗಾಳಿ, ಬೆಳಕು ಸುತ್ತ ಸಸ್ಯರಾಶಿ, ಪರ್ವತಗಳು, ಎಡಕ್ಕೆ ಸುಂದರ ಮುಖವಾಡದಂತೆಯೇ ಕಂಡು ಬಂದ ಪರ್ವತ…. ಇನ್ನೇನು ಬೇಕು…. ಎಲ್ಲರನ್ನೂ ಕೂಗಿ ಕರೆದು.. ಅದನ್ನು ತೋರಿಸಿ ಸಿಳ್ಳೇ ಹಾಕಿ ಫೋಟೋ ತೆಗೆದು ಗಾಳಿಗೆ ಮೈಹೊಡ್ಡಿ ನಿಂತದ್ದಾಯ್ತು… ಅಬ್ಬಾ ಎಲ್ಲರ ಮುಖದಲ್ಲೂ ಮುಗುಳ್ನಗೆ… ಅಲ್ಲೇ ಕಾಡು ಕೋಳಿ ಕಂಡು ಬಂತು…ಹಾಗೇ ಅಲ್ಲೇ ಎರಡಾಗಿದ್ದ ರಸ್ತೆಯ ಪಕ್ಕ ಕಲ್ಲಿನಲ್ಲಿ ಸಣ್ಣದಾಗಿ ಒಂದು ಗೂಡು ಕಟ್ಟಿ ಮುಂದೆ ನೆಡೆದ ನಾವು ಅಂದಿನ ಪಯಣವನ್ನು ಅಂತ್ಯಗೊಳಿಸುವ ಸಮಯ ಹತ್ತಿರ ಬರುವುದನ್ನು ಲೆಕ್ಕಾಚಾರ ಹಾಕುತ್ತಿದ್ದೆವು…
ಮೇಲೆ ಹತ್ತುತ್ತಿದ್ದ ನಮಗೆ ಮೆಟ್ಟಿಲುಗಳ ಮಾದರಿಯಲ್ಲಿ ಮುಂದಿನ ಹಾದಿ ಕಂಡು ಬಂತು.. ಹತ್ತುವ ದಾರಿಯಲ್ಲಿ ಸಣ್ಣದೊಂದು ನೀರ ಸೆಲೆ. ಈಗಾಗಲೇ ಕುಡಿದು ಮುಗಿಸಿದ್ದ ಪ್ಲಾಸ್ಟಿಕ್ ಬಾಟಲಿಗಳಿಗೆ ತಟ್ಟನೆಯ ನೀರನ್ನು ತುಂಬಿಸಿಕೊಂಡ ನಾವು ಅದರ ಸ್ವಾದವನು ಅಲ್ಲೇ ಆಸ್ವಾದಿಸಿ ಮತ್ತೊಮ್ಮೆ ಬಾಟಿಲುಗಳನ್ನು ತುಂಬಿಸಿಕೊಂಡು ಮೇಲಿನ ಹುಲ್ಲುಗಾವಲು ತಲುಪಿದೆವು… ಘಂಟೆ ೪:೦೦ ಇರಬಹುದು… ಮುಂದಿನ ಶೂಲೆ ಕಂಡು ಇದನ್ನು ಇನ್ನು ದಾಟಲು ಸಾಧ್ಯವಿಲ್ಲವೆಂದೂ ನಾವು ಇಲ್ಲೇ ಟೆಂಟ್ ಹಾಕಬೇಕೆಂದು ಸಲಹೆ ಇತ್ತವರು ನಮ್ಮ ಗುರು ರವಿ… ಅಂತೆಯೇ ಸಿದ್ದತೆ ಮುಂದುವರೆಯಿತು.. ಟೆಂಟ್ ಹಾಕಲು ನಾವು ಸಿದ್ದರಾದೆವು.. ಅದಕ್ಕೂ ಮುಂಚೆ ಶೂ ಬಿಚ್ಚಿ ಜಿಗಣೆಗಳು ಮಾಡಿದ್ದ ಕಿತಾಪತಿಯ ಪರೀಕ್ಷೆ ಆಗಿತ್ತು.. ನನ್ನ ಕಾಲಿಗೂ, ರವಿಯವರ ಕಾಲಿಗೂ ಕಡಿದಿದ್ದ ಜಿಗಣೆಗಳು ಅರವಿಂದನನ್ನು ಮುಟ್ಟದೇ ಇದ್ದದ್ದು ಆಶ್ಚರ್ಯಕರವಾಗಿತ್ತು.. ಪವಿತ್ರಾ ಮತ್ತು ರಾಜೀವ್ ಜಿಗಣೆಯ ಸಾಕ್ಸ್ ಹಾಕಿಕೊಂಡಿದ್ದರಿಂದ ಅವರು ಇದರಿಂದ ತಪ್ಪಿಸಿಕೊಂಡಿದ್ದರು.. ಅದನ್ನು ಕೊಂಡೂ ಹಾಕಿಕೊಳ್ಳದಿದ್ದ ನನ್ನ ಕಾಲನ್ನು ಎಳೆದದ್ದೂ ಮುಗಿದಿತ್ತು..
ಟೆಂಟ್ ಹಾಕುವುದು ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ.. ಕೆಲವೇ ನಿಮಿಷಗಳಲ್ಲಿ ಟೆಂಟ್ ತಯಾರಾಗಿ, ಅಲ್ಲಲ್ಲಿ ಒಣಗಿ ಬಿದ್ದಿದ್ದ ಗಿಡಗಂಟೆಗಳನ್ನು ತಂದು ಒಲೆ ಹಚ್ಚಿ ತಿನ್ನಲಿಕ್ಕೆ ಅಣಿ ಮಾಡಿಕೊಳ್ಳುವಾಗ, ಖಾಲಿಯಾಗಿ ಕೈಗೆ ಸಿಗುತ್ತಿದ್ದ ಪೇಪರ್, ಪ್ಲಾಸ್ಟಿಕ್ ಇತ್ಯಾದಿಗಳನ್ನು ಚೀಲವೊಂದರಲ್ಲಿ ಹಾಕಲು ನಾವು ಮರೆಯಲಿಲ್ಲ.. ಇಲ್ಲಿಗಾಗಲೇ ಸುಸ್ತಾಗಿ ಕುಳಿತ ಎಲ್ಲರಿಗೂ ಮ್ಯಾಗಿ, ಒಣದ್ರಾಕ್ಷಿ ಇತ್ಯಾದಿ… ಹಾಗೇ ಕತ್ತಲಾಗುತ್ತಾ ಬಂದಂತೆ ಸುತ್ತಲಿನ ಪ್ರಕೃತಿಯ ಮಡಿಲಲ್ಲಿ ಕುಳಿತ ನಾವು ಪಕ್ಕದಲ್ಲೇ ಕಾಣುತ್ತಿದ್ದ ಚಾಲುಕ್ಯರ ದೊರೆ ಬಲ್ಲಾಳರಾಯನ ದುರ್ಗ ಕೈ ಬೀಸಿ ಕರೆಯುತ್ತಿತ್ತು…
ರೆಡಿ ಮೇಡ್ ಊಟ ಬಿಸಿ ಮಾಡಿ ತಿಂದ ನಮಗೆ ಅದೇ ಸಾಕಾಗಿತ್ತು.. ಹಸಿದ ಹೊಟ್ಟೆಗೆ ಸಿಕ್ಕದ್ದೆಲ್ಲಾ ಪಂಚಾಮೃತವೆಂಬಂತೆ.
ಅದಾದ ನಂತರ ನಮ್ಮ ಬರವಣಿಗೆಯ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದು ನಮ್ಮ ರಿಸರ್ಚ್ ಎಕ್ಸ್ಪರ್ಟ್ ಪವಿತ್ರಾ… ಅದರ ಸುತ್ತೊಂದಿಷ್ಟು ಚರ್ಚೆ… ಮತ್ತೊಂದಿಷ್ಟು ಮಾತುಕತೆ… ಚಳಿ ಸಣ್ಣಗೆ ನಮ್ಮನ್ನು ಕಂಪಿಸುವಂತೆ ಮಾಡುತ್ತಿತ್ತು…. ಕತ್ತಲಾದಂತೆ ಆಗಸದಲ್ಲೆಲ್ಲಾ ಕಂಡು ಬಂದ ನಕ್ಷತ್ರಗಳನ್ನು ಕಂಡು ಆಶ್ಚರ್ಯದಿಂದ ಅವುಗಳನ್ನು ಕಂಡು ಹಿಡಿಯುವ ಪ್ರಯತ್ನ ಸಾಗಿತು… ಕೈಲಿದ್ದ ಎಚ್.ಟಿ.ಸಿ ಟ್ಯಾಟೋ ತೆಗೆದು ಅದರಲ್ಲಿದ್ದ ಗೂಗಲ್ ಸ್ಕೈ ಮ್ಯಾಪ್ ಉಪಯೋಗಿಸಿ ಕೆಲವೊಂದು ನಕ್ಷತ್ರ ಪುಂಜಗಳು, ಗ್ರಹಗಳ ಇರುವಿಕೆ, ನಕ್ಷತ್ರಗಳ ಹೆಸರು ಇತ್ಯಾದಿಗಳನ್ನು ಕಂಡೆವು.. ಹಾಗೆ ಹೆಚ್ಚುತ್ತಿದ್ದ ಚಳಿಗೆ ತಾಳದೆ ಪೊಟರೆಗೆ ಸೇರುವ ಹಕ್ಕಿಗಳಂತೆ ಒಬ್ಬೊಬ್ಬರೇ ಟೆಂಟಿನ ಒಳಗೆ ಸೇರಿಯಾಗಿತ್ತು.. ಆರಿ ಹೋಗುತ್ತಿದ್ದ ಬೆಂಕಿಯನ್ನು ಹುರಿಹತ್ತಿಸಿ ಸುತ್ತ ನೋಡಿದವನಿಗೆ ಯಾರೂ ಕಾಣದಿದ್ದದ್ದು ಶಾಕ್ ಕೊಟ್ಟಂತಾಗಿತ್ತು.. ಮತ್ತೇನು ಮಾಡೋದು.. ನಾನು ಒಳಗೆ ನುಸುಳಿದೆ… ಅಲ್ಲೇ ಮತ್ತಷ್ಟು ಕತೆಗಳು ಇತ್ಯಾದಿ ಹೊತ್ತಿಗಿಂತ ಮುಂಚೆ ಮಲಗಿದ್ದೂ ಕೂಡ ಹೊಸರು.. ೮ಕ್ಕೇ ಮಲಗಿದ್ದೇ ಇಲ್ಲ.. ನೆಡೆದು ಸುಸ್ತಾಗಿದ್ದ ಜೀವಕ್ಕೆ ಸಿಕ್ಕ ನೆಲವೇ ಹಾಸಿಗೆಯಾಗಿ ಮಾರ್ಪಟ್ಟಿತ್ತು…