by Omshivaprakash | Jun 11, 2011 | Events, Society, Technical, technology, Wikipedia
Did you ever dream of landing in an alien land or being treated as one in your own land? I had little such thoughts way back in time and that had made me start writing about my learning’s about technology, life etc in Kannada. Today I got a chance to share my work with enthusiasts at Barcamp Bangalore 10.
Thanks barcamp for the opportunity.
Tags: Kannada, Kindarajogi, LinuxaayaNa, Localization
by Omshivaprakash | Apr 25, 2010 | Blogs
ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ನನ್ನ ಲೇಖನದ ಅಂತರ್ಜಾಲ ಪುಟ ಇಲ್ಲಿ ಲಭ್ಯವಿದೆ.
(ಮೂಲ ಪ್ರತಿ)

ಮುಂದೆ ಓದಿ…
by Omshivaprakash | Mar 7, 2010 | Blogs
ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು…
… ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

by Omshivaprakash | Mar 1, 2010 | Blogs
ಹಿಂದಿನಂತಿಲ್ಲದ ಈ ದಿನಗಳಲ್ಲಿ ಬದಲಾಗಿದ್ದಾದರೂ ಏನು?

ಮುಂದೆ ಓದಿ…
by Omshivaprakash | Jan 28, 2010 | Blogs
ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?
ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ… ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ. ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ ಕೆಂಬಣ್ಣದ, ನಕ್ಷತ್ರದಂತೆ ಕಾಣುವ ಉದಯಿಸುತ್ತಿರುವ ಮಂಗಳನನ್ನು ಕಾಣಬಹುದಾಗಿದೆ.
ಇಂದು ರಾತ್ರಿ ಮಂಗಳ ಭೂಮಿಗೆ ೬೧ ಮಿಲಿಯನ್ ಮೈಲುಗಳಷ್ಟು ಬಳಿಸಾರಲಿದೆ, ಅಂದರೆ ೯೮ ಮಿಲಿಯನ್ ಕಿಲೋಮೀಟರುಗಳು. ಇಷ್ಟು ಸಾಕು, ಖಗೋಳಾಭ್ಯಾಸ ನೆಡೆಸುತ್ತಿರುವ ಹವ್ಯಾಸಿಗಳು ತಮ್ಮ ವಿಶೇಷ ಉಪಕರಣಗಳನ್ನು ಮಂಗಳನತ್ತ ತಿರುಗಿಸಿ ಅಲ್ಲಿನ ಮೇಲೈ ಬಗೆಗಿನ ವಿಷಯಗಳನ್ನು ಸೆರೆಹಿಡಿಯಲು.

ಮುಂದೆ ಓದಿ…
by Omshivaprakash | Jan 1, 2010 | Blogs
ಗ್ರಹಣದ ಜೊತೆ ನೀಲವರ್ಣದಿಂದ ಕಂಡು ಬಂದ ಚಂದ್ರ

ಈ ಚಂದ್ರ ಪೂರ್ಣಪ್ರಮಾಣದಲ್ಲಿ ಇಂದು ಕಂಡಿದ್ದು, ಮತ್ತೆ ಈ ಒಂದು ನೋಟ ನಮಗೆ ಸಿಗುವುದು ೨೦೨೮ಕ್ಕೆ.
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು…

by Omshivaprakash | Dec 28, 2009 | Blogs
ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ ಬೀಸುತ್ತಾ, ಹೊದ್ದಿಗೆ ಸರಿಯಾಗಿ ಕಾಲಿಗೆ ಹೊದ್ದಿದೆಯೇ ಎಂದು ಪರೀಕ್ಷಿಸಿದ್ದಷ್ಟೇ ಗೊತ್ತು. ಮತ್ತ್ತೆ ಎಚ್ಚರವಾದಾಗ ಮೈಮೇಲೆ ಒಂದಷ್ಟು ಹೆಚ್ಚಿನ ಬಟ್ಟೆಗಳಿದ್ದದ್ದೂ, ಬೇರೆಯವರು ಮಾತನಾಡುತ್ತಿದ್ದ ಕಿರುದನಿ ಕೇಳಿ ಬಂತು. ಕಣ್ಣು ಬಿಡುತ್ತಿದ್ದಂತೆ ಕಂಡಿದ್ದು ಎದ್ದು ಕುಳಿತಿದ್ದ ಪವಿತ್ರಾ, ರವಿ ಮತ್ತು ಅರವಿಂದ. ನಾನು ಎಚ್ಚರವಾದಂತೆ, ನಾವೇನೋನೋ ಕೇಳಿದ್ವಿ ಕೇಳಿಸ್ಲಿಲ್ವೇನೋ? ನೋಡಿಲ್ಲಿ ಸಿಕ್ಕಾ ಪಟ್ಟೆ ನಡುಗ್ತಿದ್ದೆ ಅಂತ ಇದನ್ನೆಲ್ಲಾ ಹೊದಿಸಿದ್ದೇವೆ ಅಂದಾಗ ಹೋ! ಎಂದದ್ದಷ್ಟೇ ಗೊತ್ತು.. ಮತ್ತೆ ಸ್ವಲ್ಪ ಎದ್ದು ಕೂತೆ.

ಮುಂದೆ ಓದಿ…
Recent Comments