ಮುಂಜಾನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಹತ್ತು ಘಂಟೆಗೆ ಬಂದು ನನ್ನ ಕಾರನ್ನು ಸರ್ವೀಸ್ ಸ್ಟೇಶನ್ ಗೆ ಕೊಂಡೊಯ್ಯಲಿದ್ದವರ ಬಗ್ಗೆ ಮಾಹಿತಿ, ಬೇಕಾದ ಕಾಗದ ಇತ್ಯಾದಿಗಳಿಗೆ ಸಹಿ ಎಲ್ಲಾ ಕೊಟ್ಟು, ನನ್ನ ಮಾಮೂಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿಯದೆ, "ಛಂದ ಪುಸ್ತಕ"ದ ಸುಂದರ ಕೈಮಗ್ಗದ ಕೈಚೀಲಕ್ಕೇ ನನ್ನ ಲ್ಯಾಪ್ಟಾಪ್ ಇಳಿಬಿಟ್ಟು, ಅದರಲ್ಲಿ ಬಿ.ಜಿ.ಎಲ್ ಸ್ವಾಮಿಯವರ "ಮೈಸೂರು ಡೈರಿ" ಪುಸ್ತಕವನ್ನೂ ಹಾಕಿಕೊಂಡು ಬಾಗಿಲಿಂದಾಚೆ ಬಂದೊಡನೆ ವರುಷವೊಂದು ಹಿಂದಕ್ಕುರುಳಿತು.
ನನ್ನ ಕಾರ್ ನ ವರ್ಷಾಚರಣೆ, ಅದರ ಮೇಕಪ್ಪು, ಬಾಡಿ ವರ್ಕು ಇತ್ಯಾದಿಗಳನ್ನು ಮಾಡಿ ಮುಗಿಸಲೇಬೇಕಾಗಿರುವುದರಿಂದ ಅದಕ್ಕೆ ನನ್ನಿಂದ ಒಂದೆರಡು ದಿನಗಳ ಮಟ್ಟಿಗೆ ದೂರವಿರಬೇಕಾಗಿ ಬರುತ್ತಿರುವುದು ಅನಿವಾರ್ಯವಾಗಿದೆ.
ಮುಂದೆ ಓದಿ »





